ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
- ಡಾಕ್ಟರ್ ಸಿ. ಜಯ ಶಂಕರ ಬಾಬು
ನಮ್ಮಸುಂದರ ನಾಡಿನ ರಾಜ್ಯೋತ್ಸವ
ಎಲ್ಲರಿಗೂ ಇದು ಆನಂದೊತ್ಸವ
ವಿಶಾಲ ಭವ್ಯ ಭಾರತದ
ಸುಂದರ ನಾಡು, ನಮ್ಮ ಕನ್ನಡ ನಾಡು.
ಎಲ್ಲರಿಗೂ ಇದು ಆನಂದೊತ್ಸವ
ವಿಶಾಲ ಭವ್ಯ ಭಾರತದ
ಸುಂದರ ನಾಡು, ನಮ್ಮ ಕನ್ನಡ ನಾಡು.
ಕೊಡುಗು, ಕಾರವಾರದ ಸಸ್ಯ ಶಾಮಲೆ
ಶಾಶ್ಮೀರದ ಸೊಬಗು-
ಕಟೀಲು ದುರ್ಗಯ ಸನ್ನಿಧಿ
ಕನ್ಯಾಕುಮಾರಿಯ ನೆನಹು.
ಕೋಲಾರಿನದ ಬಂಗಾರ
ನಮ್ಮಲ್ಲರ ಸೊಭಗಿನ ಆಭರಣ
ಮೈಸೂರು ಅರಮನೆಯ ವೈಭವ
ಹಂಪಿಯ ಗತವೈಭವದ
ಕಮಲ ಮಹಲ್
ಭವ್ಯ ರಾಜ ವೈಭವದ ಸಾಕ್ಷಾತ್ಕಾರ
ಅನನ್ಯ ಶಿಲ್ಪ ಕಲೆಯ ಬೀಡು
ಬೇಲೂರು, ಹಳೆಬೀಡು.
ಬಸವೇಶ್ವರರ ಕರ್ಮಭೂಮಿ
ಎಲ್ಲ ಧರ್ಮೀಯರೂ
ಸಹಬಾಳ್ವೆ ನಡೆಸುವ ಈ ನಾಡು
ನಮ್ಮ ಕನ್ನಡ ನಾಡು.
ಸಂಗೀತ, ಸಾಹಿತ್ಯ, ಲಲಿತಕಲಾ,
ಶಿಕ್ಷಣ, ತಾಂತ್ರಿಕ, ಮಾಹಿತಿ ತಂತ್ರಜ್ಞಾನದಿ
ಉಚ್ಚ ಹೆಸರಿರುವ ಈನಾಡು
ವಿಶ್ವ ಚೇತನ, ವಿಶ್ವ ಮಾನವತೆಯ
ಮಹಾನಗರದ ನಾಡು
ಕರ್ನಾಟಕ ರಾಜ್ಯೋತ್ಸವ
ಅಭಿಮಾನದಿ ಆಚರಿಸೋಣ
ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ.
***
ಶ್ರೀ ಬಾಬುಅವರಿಗೆ ನಮಸ್ಕಾರಗಳು. ಸುಂದರ ಶಬ್ದಗಳೊಂದಿಗೆ ಒಳ್ಳೆ ಭಾವದ ನಿಮ್ಮ ಕವನ ಚೆನ್ನಾಗಿದೆ. ಅಭಿನಂದನೆಗಳು.
ReplyDelete